1.ಆಗಸ್ಟ್_೨೦_ವಿಶ್ವ_ಸೊಳ್ಳೆಗಳ_ದಿನಾಚರಣೆ.
•ಇಂದು "ಉಂಡ ಮನೆಗೆ ದ್ರೋಹ ಬಗೆಯುವ ಸಣ್ಣ ಕೀಟವಾದ ಸೊಳ್ಳೆಗಳ ನಿರ್ಮೂಲನಾ ದಿನ"
# 1897 ರ ಆಗಸ್ಟ್ 20 ರಂದು ಸಿಕಂದರಾಬಾದಿನ ದಾಸ್ ಪೇಟೆಯಲ್ಲಿದ್ದ ರೊನಾಲ್ಡ್ ರಾಸ್ ಎಂಬ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಮೊದಲ ಬಾರಿಗೆ ಸೊಳ್ಳೆಗಳಿಂದ ಮಲೆರಿಯಾ ರೋಗ ಹರಡುತ್ತದೆ ಎಂಬುದನ್ನು ಕಂಡುಹಿಡಿದು, ಜಗತ್ತಿಗೆ ಸಾರಿದ. ಅದರ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 20ರಂದು ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.
# ಭಾರತೀಯ ಮೂಲದ ಬ್ರಿಟಿಷ್ ವೈದ್ಯ ಸರ್ ರೋನಾಲ್ಡ್ ರೋಸ್ 1897ನೇ ಆಗಸ್ಟ್ 20ರಂದು,ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನೆಲೆನಿಂತು ಸೊಳ್ಳೆಗಳ ಸಂತಾನೋತ್ಪತ್ತಿ ಅಧಿಕಗೊಳ್ಳುತ್ತದೆ.#ಅನಾಫಿಲೀಸ್ ಸೊಳ್ಳೆಗಳಿಂದ "ಮಲೇರಿಯಾ",#ಏಡೀಸ್ ಸೊಳ್ಳೆಗಳಿಂದ "ಡೆಂಗೆ ಹಾಗೂ ಚಿಕುನ್ ಗುನ್"ಯ ಜ್ವರ,#ಕ್ಯುಲೆಕ್ಸ್ ಸೊಳ್ಳೆಗಳಿಂದ "ಆನೆಕಾಲು" ಹರಡುತ್ತವೆ.ಜಗತ್ತಿನಲ್ಲಿ ವರ್ಷಕ್ಕೆ ಸುಮಾರು 50ಲಕ್ಷ ಜನ ಮಲೇರಿಯಾ ರೋಗಕ್ಕೆಬಲಿಯಾಗುತ್ತಿದ್ದಾರೆ.
# ರೋನಾಲ್ಡ್_ರೋಸ್ ನು1857ರ ಮೇ13ರಂದು,ಭಾರತದ ಉತ್ತರಾಖಂಡ ರಾಜ್ಯದಲ್ಲಿ ಜನಿಸಿದನು.ವೈದ್ಯಕೀಯ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಮುಗಿಸಿದ ಇವರು,ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಸೊಳ್ಳೆಗಳ ಹೊಟ್ಟೆಯಲ್ಲಿರುವ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿಗಳಿಂದ ಮಲೇರಿಯಾ ರೋಗ ಬರುತ್ತದೆ ಎಂದು ಸಂಶೋಧನೆಗಳಿಂದ ಕಂಡುಹಿಡಿದನು..
2.ವಿಶ್ವ ಮಾನವೀಯ ದಿನ: 19 ಆಗಸ್ಟ್ (World Humanitarian Day).
..ಜಾಗತಿಕ ಮಾನವೀಯತಾ ದಿನವನ್ನು ವಿಶ್ವದಾದ್ಯಂತ ಆಗಸ್ಟ್ 19 ರಂದು ಆಚರಿಸಲಾಗುತ್ತದೆ, ಮಾನವೀಯ ಸೇವೆಗಳಿಗಾಗಿ ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಕೆಲಸ ಮಾಡುವ ಕೆಲಸಗಾರರಿಗೆ ಗೌರವ ಸಲ್ಲಿಸುವುದು ಮತ್ತು ಪ್ರಪಂಚದಾದ್ಯಂತದ ಬಿಕ್ಕಟ್ಟುಗಳಿಂದ ಪೀಡಿತ ಜನರಿಗೆ ಬೆಂಬಲವನ್ನು ಕೊಡುವುದು ಇದರ ಉದ್ದೇಶವಾಗಿದೆ. ವಿಶ್ವ ಮಾನವೀಯ ದಿನದಂದು ಪ್ರಾರಂಭವಾದ ಪ್ರಚಾರವು "# NotATarget" ಆಗಿದೆ. 19 ಆಗಸ್ಟ್ 2003 ರಂದು ಇರಾಕ್ನ ಬಾಗ್ದಾದ್ನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯ ಮೇಲಿನ ಬಾಂಬ್ ದಾಳಿಯ ಸ್ಮರಣಾರ್ಥವಾಗಿ ಯುಎನ್ ಜನರಲ್ ಅಸೆಂಬ್ಲಿಯಿಂದ ದಿನವನ್ನು ಗೊತ್ತುಪಡಿಸಲಾಯಿತು.
3.ಸೈಕ್ಲಿಸ್ಟ್ ಎಸ್ಒವ್ ಅಲ್ಬೆನ್ ರಿಂದ ಭಾರತಕ್ಕೆ ಮೊದಲ ಪದಕ..
.ಸ್ವಿಟ್ಜರ್ಲೆಂಡ್ನ ಐಗಲ್ನಲ್ಲಿನ UCI ಜೂನಿಯರ್ ಟ್ರ್ಯಾಕ್ ಸೈಕ್ಲಿಂಗ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಭಾರತದ ಮೊದಲ ಬಾರಿಗೆ ಬೆಳ್ಳಿ ಪದಕವನ್ನು ಹದಿಹರೆಯದ ಸೈಕ್ಲಿಸ್ಟ್ ಎಶೋ ಅಲ್ಬೆನ್ ಸೃಷ್ಟಿಸಿದ್ದಾರೆ. ದೆಹಲಿಯ
ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿ ಕ್ರೀಡಾ ಪ್ರಾಧಿಕಾರದಲ್ಲಿ ತಯಾರಿ ನಡೆಸಿರುವ 17 ವರ್ಷದ ಅಲ್ಬೆನ್ ಮೂಲತಃ ಅಂಡಮಾನ್ ಮತ್ತು ನಿಕೋಬಾರ್ ನಿಂದಿರುತ್ತಾರೆ. ರೋಮಾಂಚಕ ಫೋಟೋ-ಫಿನಿಶ್ನಲ್ಲಿ ಚಿನ್ನದ ಪದಕ ವಿಜೇತ ಸ್ಟ್ಯಾಸ್ಟನಿಗಿಂತ 0.017 ಸೆಕೆಂಡುಗಳ ಕಾಲ ಹಿಂದಿದ್ದರು.
4..18 ನೇ ಏಷ್ಯನ್ ಗೇಮ್ಸ್ನ : ಅಪುರ್ವಿ ಚಂದೇಲಾ ಮತ್ತು ರವಿ ಕುಮಾರ್ ರಿಂದ ಭಾರತವಕ್ಕೆ ಮೊದಲ ಪದಕ..
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮೊದಲ ಪದಕವನ್ನು ಅಪುರ್ವಿ ಚಂದೇಲಾ ಮತ್ತು ರವಿ ಕುಮಾರ್ ಅವರು ನೀಡಿದರು. 10 ಮೀಟರ್ ಏರ್ ರೈಫಲ್ ಮಿಕ್ಸ್ಡ್ ಟೀಮ್ ಈವೆಂಟ್ನ ಫೈನಲ್ಸ್ನಲ್ಲಿ, ಜೋಡಿಯು ಕಂಚಿನ ಪದಕವನ್ನು 429.9 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು.ತೈಪೀ ಚಿನ್ನದ ಪದಕವನ್ನು ಪಡೆಯಿತು ಮತ್ತು ಚೀನಾ ಬೆಳ್ಳಿ ಪದಕ ಪಡೆಯಿತು
10 ಮೀಟರ್ ಏರ್ ಪಿಸ್ತೋಲ್ ಮಿಶ್ರ ತಂಡದಲ್ಲಿ ಭಾರತದ ಜೋಡಿ, 16 ವರ್ಷದ ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವಕಪ್ ಚಿನ್ನದ ಪದಕ ವಿಜೇತ ಮನು ಭೇಕರ್, ಮತ್ತು ಅಭಿಷೇಕ್ ವರ್ಮಾ ಅವರು ಅರ್ಹತಾ ಪಂದ್ಯದಲ್ಲಿ ಆರನೇ ಸ್ಥಾನ ಪಡೆದ ನಂತರ ಫೈನಲ್ಸ್ಗೆ ಅರ್ಹತೆ ಗಳಿಸುವಲ್ಲಿ ವಿಫಲರಾದರು.
CWG ಚಿನ್ನದ ಪದಕ ವಿಜೇತ ಶ್ರೇಯಾಸಿ ಸಿಂಗ್ ಮತ್ತು ಸೀಮಾ ತೋಮರ್ ಈಗ ಮಹಿಳಾ ಟ್ರ್ಯಾಪ್ ಸ್ಪರ್ಧೆಯಲ್ಲಿದ್ದಾರೆ. ಮಾನವಿಜಿತ್ ಸಿಂಗ್ ಸಂಧು ಮತ್ತು ಲಕ್ಷ್ಯಗಳೊಂದಿಗೆ ಪುರುಷರ ಅರ್ಹತೆಗಳ ಟ್ರ್ಯಾಪ್ ಸ್ಪರ್ಧೆಯಲ್ಲಿದ್ದಾರೆ.
5. ಇನ್ಫೋಸಿಸ್ CFO ಎಂಡಿ ರಂಗನಾಥ್ ರಾಜೀನಾಮೆ.
..ಇನ್ಫೋಸಿಸ್ ಮುಖ್ಯ ಹಣಕಾಸು ಅಧಿಕಾರಿ ಎಂ.ಡಿ ರಂಗನಾಥ್, ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ವೇರ್ ಸೇವಾ ಕಂಪೆನಿಯಾದ ಇನ್ಫೋಸಿಸ್ನಿಂದ ರಾಜೀನಾಮೆ ನೀಡಿದ್ದಾರೆ. ಸುಮಾರು ಎರಡು ದಶಕಗಳ ಹಿರಿಯ ಉದ್ಯೋಗಿ, ತನ್ನ ಸ್ಥಾನದಿಂದ ಅನಿರೀಕ್ಸಿತವಾಗಿ ಕೆಳಗಿಳಿದಿದ್ದಾರೆ. ಇದು ಮೂರು ವರ್ಷಗಳ ಅವಧಿಯಲ್ಲಿ ಇನ್ಫೋಸಿಸ್ನಲ್ಲಿ ಎರಡನೇ ಸಿಎಫ್ಓ ನಿರ್ಗಮನ.
malageravikant@gmail.com
ReplyDeleteSuper
ReplyDelete